ಮಂಗಳವಾರ, ಡಿಸೆಂಬರ್ 1, 2020

ಬಡತನದ ಬದುಕು ಭವಿಷ್ಯ

"ಶ್ರೀಮಂತರಲ್ಲಿ ಮಡಿವಂತಿಕೆ ಇರುತ್ತದೆ, ಬಡವರಲ್ಲಿ  ಇರುವುದಿಲ್ಲ" ಎನ್ನುವುದು ಸರಿಯಲ್ಲ. ಮಡಿವಂತಿಕೆ ಎನ್ನುವುದಾದರೂ ಏನು? ಅಸ್ಪೃಶ್ಯತೆಯೇ, ಸಭ್ಯತೆಯೇ ಯಾವುದು?

ಬಡವರಲ್ಲಿ  ಸಭ್ಯತೆ ಸಂಸ್ಕೃತಿ ದೇವರು, ಧರ್ಮ ಕರ್ಮದ ಅಂಜಿಕೆ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ...ಬದುಕಿನ ನೂರ್ಮುಖಗಳನ್ನು ಎದುರಿಸಿ ಬಾಳುವ ಛಲ ಇರುವವರು ಬಹು ಸಂಖ್ಯೆಯಲ್ಲಿ ಇರುತ್ತಾರೆ. ಬಡತನದ ದುಡಿಮೆಲಿ ದೇವರನ್ನು ಕಾಣುತ್ತ ಶ್ರೀಮಂತರಾದವರಿದ್ದಾರೆ. 

 ಬಡವರೆಲ್ಲಾ ನಾಳೆಯ ಚಿಂತೆ ಇಲ್ಲದವರಲ್ಲ... ಕೂಲಿ ಕರ್ಮಿಕರಲ್ಲಿ ಗಾರೆ ಕೆಲಸದವರೂ ನಾಳೆಯೊಂದಿದೆ ಎಂಬ ಆಸೆಯಲಿ, ದೈವನಂಬಿಕೆಯಲ್ಲಿ ಕಷ್ಟಾರ್ಜೀತ ಹಣದಲ್ಲೇ ಹೆಂಡತಿ ಮಕ್ಕಳೊಡನೆ ಯಾತ್ರೆ ಮಾಡುತ್ತಾರೆ ಧರ್ಮ ಸ್ಥಳ, ತಿರುಮಲೆ ತಿರುಪತಿಗೆ‌ಹೋಗಿ ಮುಡಿಕೊಡುತ್ತಾರೆ ಹರಕೆ ಕಾಣಿಕೆ ಸಲ್ಲಿಸುತ್ತಾರೆ.ಬಡವರು ಕಂಡ ದೇವರು ಅದಷ್ಟು ದೊಡ್ಡವನೋ.... ಬಡತನದಲ್ಲೇ.ಪ್ರತಿಭಾವಂತರು.ಹೆಚ್ಚು ಇರುತ್ತಾರೆಂಬುದು ಉತ್ಪ್ರೇಕ್ಷೆಯೇನಲ್ಲ..

ಬಡತನಕ್ಕೂ ಪ್ರತಿಭೆಗೂ ದೈವಿತೆಯಲಿ ಕಾಣುವ ಬಿಡಿಸಲಾಗದ ನಂಟು. ಅಂತೆಯೇ ದೈವಭಕ್ತ ವಿಜ್ಞಾನಿಗಳು ಅಂದೂ ಇದ್ದರು ಇಂದಿಗೂ  ಇದ್ದಾರೆ.

ಹಳ್ಳಿ ಯೂರ.ಗುಡಿಗಳಲ್ಲಿ ಕಲ್ಲು ದೇವರ.ಮೂರ್ತಿಗೆ.ಹೂ ಅಪ್ಪಣೆ ಕೇಳಿ ತಮ್ಮ ಬದುಕು.ಭವಿಷ್ಯದ ಕೆಲಸಕಾರ್ಯಗಳನ್ನು ಮಾಡಿ ಗೆಲವು ಕಾಣುತ್ತಾರೆ.

 ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುತ್ತೇವೆ ಬಡತನದಿಂದ ದುಡಿಮೆಯಲ್ಲೇ ಉಳಿತಾಯ ಮಾಡಿ ಸ್ಥಿತಿ ವಂತರಾಗುತ್ತೇವೆ ಎಂಬ ಭರವಸೆಯಲ್ಲಿ ಬದುಕುತ್ತಾರೆ.

ಮಡಿವಂತಿಕೆ ಗಿಂತಲೂ ಬುದ್ಧಿವಂತಿಕೆ ಸಭ್ಯತೆ ಇಲ್ಲದವರಾಗಿದ್ದರೆ ಈ ವ್ಯವಹಾರಿಕ ಪ್ರಪಂಚದಲ್ಲಿ  ಅವರು ಬದುಕುತ್ತಲೇ ಇರಲಿಲ್ಲ!

ಓದಿರಿ, ನನ್ನ ಶ್ರೀ ತಿರುಮಲೇಶನತ್ರಿಗುಣಾತ್ಮಕ ಪ್ರಪಂಚ